
ಮಂಗಳೂರು:17ನೇ ರಾಷ್ಟ್ರೀಯ ಯುವಜನೋತ್ಸವದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡ ಜಮ್ಮು ಕಾಶ್ಮೀರದ ಸಚಿವ ರಾಜೇಂದ್ರ ಸಿಂಗ್ ಚಿಬ್ ಮಾತನಾಡಿ ಕಾರ್ಯಕ್ರಮದ ಯಶಸ್ಸು ಸಂತಸ ತಂದಿದೆ ಎಂದರು. ಯುವಜನೋತ್ಸವದಲ್ಲಿ ಉತ್ತಮ ಪಾಲ್ಗೊಳ್ಳುವಿಕೆ, ಯುವಕರ ಉತ್ಸಾಹಗಳು ಸಂತಸವನ್ನುಂಟುಮಾಡಿದೆ.ಸರ್ವರ ಸಹಭಾಗಿತ್ವ ಪಾಲ್ಗೊಳ್ಳುವಿಕೆಯ ಮೂಲಕ ಅತ್ಯಂತ ಶಿಸ್ತುಬದ್ಧ ಕಾರ್ಯಕ್ರಮ ನಡೆದಿದೆ ಇವೆಲ್ಲ ಸಂತಸಕ್ಕೆ ಕಾರಣವಾಗಿದೆ ಎಂದವರು ಹೇಳಿದರು.