
ಸೃಜನಾತ್ಮಕ ಕಲೆ,ಸೃಜನಾತ್ಮಕ ಬರವಣಿಗೆ, ಪ್ರದರ್ಶನ ಕಲೆ ಮತ್ತು ವಿಜಾನದಲ್ಲಿ ನೂತನ ಅವಿಷ್ಕಾರ ಕ್ಷೇತ್ರಗಳಲ್ಲಿ ಸ್ಪರ್ಧೆ ಮತ್ತು ತರಬೇತಿಯನ್ನು ಏರ್ಪಡಿಸಲಾಗಿದೆ ಎಂದು ರಾಜಯ ಬಾಲಭವನ ಸೊಸೈಟಿ ಅಧ್ಯಕ್ಷೆ ಶ್ರೀಮತಿ ಸುಲೋಚನ ಜಿ.ಕೆ.ಭಟ್ ಮಾಹಿತಿ ನೀಡಿದರು.ವಿವಿಧ ರಾಜಯಗಳಿಂದ ಬಂದಿರುವ ಮಕ್ಕಳು ಆಯಾಯ ರಾಜ್ಯ ಗಳ ನೃತ್ಯ,ಸಾಂಸ್ಕೃತಿಕ ಕಲೆಗಳನ್ನು ಇಲ್ಲಿಯ ಜನರ ಮುಂದೆ ಪ್ರದರ್ಶಿಸಲಿದ್ದಾರೆ. ಪಣಂಬೂರು ಕಡಲ ಕಿನಾರೆಯಲ್ಲಿ ನಂದಗೋಕುಲ ವೇದಿಕೆಯಡಿ ಮಕ್ಕಳು ರಚಿಸಿದ ವಿವಿಧ ವಿನ್ಯಾಸದ ಆಕರ್ಷಕ ಗಾಳಿಪಟಗಳ ಹಾರಾಟ,ಮರಳು ಶಿಲ್ಪಕಲೆ ಮತ್ತು ಸಾಂಸ್ಕೃತಿಕ ಕಾರ್ಕ್ರಮಗಳನ್ನು ಆಯೋಜಿಸಲಾಗಿದ್ದೆ ಎಂದರು. ಜನವರಿ 25 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದ ಗೌಡ,ಕೇಂದ್ರ ಕಾರ್ಪೋರೇಟ್ ವ್ಯವಹಾರಗಳ ಸಚಿವರಾದ ಡಾ.ಎಂ.ವೀರಪ್ಪ
ಮೊಯಿಲಿ ಸಹಿತ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ದ.ಕ.ಜಿಲ್ಲಾಧಿಕಾರಿ ಡಾ.ಎನ್.ಎಸ್.ಚನ್ನಪ್ಪ ಗೌಡ,ಸಿಇಓ ಡಾ.ಶಿವಶಂಕರ್ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.