
ರಾಷ್ಟ್ರದ ನಾನಾ ಭಾಗಗಳ 73 ಬಾಲ ಭವನಗಳಿಂದ ಹಾಗೂ ದ.ಕ. ಜಿಲ್ಲೆಯ ಸ್ಥಳೀಯ ಶಾಲಾ ಮಕ್ಕಳು ಸೇರಿದಂತೆ ಸುಮಾರು 2500 ರಿಂದ 3000 ಮಕ್ಕಳು ಭಾಗವಹಿಸಲಿದ್ದು, ಹೊರ ರಾಜ್ಯದ, ದೂರದೂರಿನ ಮಕ್ಕಳಿಗೆ ವಾಮಂಜೂರು ಪರಿಸರದ 14 ಶಾಲೆಗಳಲ್ಲಿ ಉತ್ಸವದ ಸಮಯದಲ್ಲಿ ವಾಸ್ತವ್ಯದ ವ್ಯವಸ್ಥೆಯನ್ನು ಮಾಡಲಾಗುವುದು. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಸುಸಜ್ಜಿತ ಆ್ಯಂಬುಲೆನ್ಸ್ನೊದಿಗೆ ವೈದ್ಯರ ತಂಡ ಸೇವೆ ನೀಡಲಿದೆ. ಜ.22ರಂದು ಸಂಜೆ 3-30ಕ್ಕೆ ವಾಮಂಜೂರಿನಿಂದ ಉತ್ಸವದ ನಡೆಯಲಿರುವ ಪಿಲಿಕುಲದ ಬಯಲು ರಂಗಮಂದಿರದವರೆಗೆ ಜಿಲ್ಲೆಯ ವಿವಿಧ ಕಲಾವಿದರ ತಂಡದ ಮೆರವಣಿಗೆ ನಡೆಯಲಿದೆ. ಅಂದು ಸಂಜೆ 5-30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಈ ಸಂದರ್ಭ ಜಿಲ್ಲೆಯ ಸಂಸ್ಕೃತಿಯನ್ನು ಬಿಂಬಿಸುವ ಬೊಂಬೆಯಾಟ, ಕಿರು ಯಕ್ಷಗಾನ, ನಾಟ್ಯ ಪ್ರದರ್ಶನದೊಂದಿಗೆ ದಿನದ ಕಾರ್ಯಕ್ರಮ ಕೊನೆಗೊಳ್ಳಲಿದೆ.
ಜ.23ರಂದು ಯೋಗ ಶಿಕ್ಷಣದೊಂದಿಗೆ ಉತ್ಸವ ಆರಂಭಗೊಂಡು ಚಿತ್ರಕಲೆ ಪ್ರದರ್ಶನ, ಚಿತ್ರ ಬಿಡಿಸುವ ತರಬೇತಿ ನಡೆಯಲಿದೆ. ಕರಕುಶಲ ಪ್ರದರ್ಶನದಲ್ಲಿ ಮಕ್ಕಳಿಂದ ಮಣ್ಣಿನಲ್ಲನ ನಿಗದಿತವಾದ ಆಕೃತಿ ಬಿಡಿಸಲು ತರಬೇತಿ ಮತ್ತು ಸ್ಪರ್ಧೆ ಏರ್ಪಡಿಸಲಾಗುವುದು. ಕತೆ ಬರೆಯುವುದು, ಕತೆ ಹೇಳುವುದು ಕತೆ ಬರೆಯಲು ತರಬೇತಿ ಮತ್ತು ಸ್ಪರ್ಧೆ ನಡೆಯಲಿದೆ. ಪೈಂಟಿಂಗ್ ತರಬೇತಿ ಮತ್ತು ಪೈಂಟಿಂಗ್ ಸ್ಪರ್ಧೆ ಮೊದಲಾದ ವಿಷಯಗಳಲ್ಲಿ ಸ್ಪರ್ಧೆ ನಡೆಸಿ ಪಕ್ಷಿ ಪ್ರದರ್ಶನ ಹಾಗೂ ಪ್ರಾಣಿ ಸಂಗ್ರಹಾಲಯ ವೀಕ್ಷಣೆ, ಖಗೋಳ ವೀಕ್ಷಣೆ ಬಳಿಕ ಜಾದೂ ಪ್ರದರ್ಶನ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ಧೇಶಕಿ ಶಕುಂತಳಾ, ಮೇಯರ್ ಪ್ರವೀಣ್, ಸ್ಥಳೀಯ ಕಾರ್ಪೋರೇಟರ್ ರೂಪಾ ಡಿ. ಬಂಗೇರ ಉಪಸ್ಥಿತರಿದ್ದರು.