Tuesday, February 21, 2012

ತುಂಬೆಯಲ್ಲಿ ನೇತ್ರಾವತಿಗೆ ಪೂಜೆ

ಮಂಗಳೂರು,ಫೆಬ್ರವರಿ.21: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ನೀರು ಪೂರೈಸುತ್ತಿರುವ ತುಂಬೆ ನೇತ್ರಾವತಿ ನದಿಯ ವೆಂಟೆಡ್ ಡ್ಯಾಂನಲ್ಲಿ ಮಂಗಳವಾರ ಮೇಯರ್ ಪ್ರವೀಣ್ ಅಂಚನ್ ಅವರು ಗಂಗಾಪೂಜೆ ನೆರವೇರಿಸಿದರು.ಕಾರ್ಯ ಕ್ರಮದ ಬಳಿಕ ಮಾತ ನಾಡಿದ ಮೇಯರ್, ಗಂಗಾ ಮಾತೆ ನೀರಿನ ಸಮಸ್ಯೆ ಎದು ರಾಗ ದಂತೆ ನೋಡಿ ಕೊಳ್ಳಲಿ ಜೂನ್ ಅಂತ್ಯ ದವ ರೆಗೂ ನಗರಕ್ಕೆ ನೀರು ದೊರೆ ಯುವಂ ತಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದೆ ಎಂದರು.
ಪ್ರಕೃತಿಯಲ್ಲೂ ದೇವರನ್ನು ಕಾಣುವ ಭಾರತೀಯರು, ಏರಿಕೆಯಾಗುತ್ತಿರುವ ತಾಪಮಾನದ ಈ ಸಂದರ್ಭ ಜಲ ಸಂರಕ್ಷಣೆ, ಪರಿಸರ ಸಂರಕ್ಷಣೆ ಇಂದಿನ ಅಗತ್ಯ ಎಂದು. ಉಪಮೇಯರ್ ಗೀತಾ ನಾಯಕ್ ಹೇಳಿದರು. ಆಯುಕ್ತ ಡಾ.ಹರೀಶ್ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು ಹಾಗೂ ಅಧಿರಿಗಳು ಭಾಗವಹಿಸಿದ್ದರು.
ತುಂಬಿ ಹರಿಯುತ್ತಿರುವ ತುಂಬೆ ಅಣೆಕಟ್ಟು
ಪ್ರಸಕ್ತ 4 ಮೀಟರ್ ಎತ್ತರದ ತುಂಬೆ ಅಣೆಕಟ್ಟು ಸಂಪೂರ್ಣವಾಗಿ ತುಂಬಿದ್ದು, ಮನಪಾ ವ್ಯಾಪ್ತಿಗೆ ಮುಂದಿನ ಮೂರು ತಿಂಗಳ ಅವಧಿಗೆ ಸಾಕಾಗುವಷ್ಟು ನೀರು ಅಣೆಕಟ್ಟಿನಲ್ಲಿ ಶೇಖರವಾಗಿದೆ.