
ಇಂದು ಕಾರ್ಮಿಕ ಇಲಾಖೆ ಯಲ್ಲಿ ಕಾರ್ಮಿಕ ದಿನಾ ಚರಣೆ ಅಂಗವಾಗಿ ಆಯೋಜಿ ಸಲಾದ ಕಾರ್ಮಿಕ ಸಪ್ತಾಹ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತ ನಾಡು ತ್ತಿದ್ದರು. ಕಾರ್ಮಿ ಕರು ಹಕ್ಕು ಗಳೊಂ ದಿಗೆ ಕರ್ತವ್ಯ ಪ್ರಜ್ಞೆ ಯನ್ನು ಮೆರೆಯ ಬೇಕೆಂದ ಅಧಿಕಾರಿ ಗಳು, ಮೇ ಒಂದ ರಿಂದ 7ರವರೆಗೆ ಇಲಾಖೆ ಕಾರ್ಮಿಕ ಕಾನೂನು ಗಳ ಬಗ್ಗೆ ಕಾರ್ಮಿ ಕರಿಗೆ ಮಾಹಿತಿ ನೀಡು ತ್ತಿದೆಯಲ್ಲದೆ, ಧೂಮಪಾನ ನಿಷೇಧ, ಕುಡಿತದಿಂದಾಗುವ ಅನಾಹುತಗಳು, ತಲೆಹೊರೆ ಕಾರ್ಮಿಕರಿಗಾಗಿ ವಿಶೇಷ ಮಾಹಿತಿ ಶಿಬಿರ, ವಾಸನ್ ಐ ಕೇರ್ ನಲ್ಲಿ ಮಹಿಳಾ ಕಾರ್ಮಿಕರಿಗಾಗಿ ಲೈಂಗಿಕ ದೌರ್ಜನ್ಯ ಕುರಿತ ಮಾಹಿತಿ ಶಿಬಿರವನ್ನು ಆಯೋಜಿಸಲಾಗಿತ್ತು ಎಂದರು.
ಇಂದು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ನೋಂದಣಿಯ ಬಗ್ಗೆ ಸಂವಾದ ಮತ್ತು ಮಾಹಿತಿ ನೀಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವಲಯದಲ್ಲಿ ವಲಸೆ ಕಾರ್ಮಿಕರು ಗಣನೀಯ ಸಂಖ್ಯೆಯಲ್ಲಿರುವುದು ಹಾಗೂ ಇವರಿಗೆ ದೃಢೀಕರಣ ನೀಡಲು ಮಾಲೀಕರು ಹಿಂದೇಟು ಹಾಕುತ್ತಿರುವುದನ್ನು ಇಲಾಖೆ ಗಮನಿಸಿ, ಕಾರ್ಮಿಕ ಮುಖಂಡರು ದೃಢೀಕರಿಸ ಬಹುದು. ಹಾಗೂ ಕಾರ್ಮಿಕ ಸಂಘಕ್ಕೆ ಒಂದು ಗುರುತು ಚೀಟಿ ಮಾಡಿಸಿದರೆ 5 ರೂ. ನೀಡುವುದಾಗಿಯೂ ಸಹಾಯಕ ಕಾರ್ಮಿಕ ಆಯುಕ್ತರು ತಿಳಿಸಿದರು.

ಸಮಾರಂಭದಲ್ಲಿ ಅನಿಸಿಕೆ ಹಂಚಿಕೊಂಡ ಕಾರ್ಮಿಕ ಸಂಘಟನೆಗಳ ಮುಖಂಡರಾದ ಮೊಹಮ್ಮದ್ ರಫಿ, ಬಿ ಎಸ್ ಚಂದ್ರು, ವಾಸುದೇವ, ವಸಂತ ಬೆಳ್ತಂಗಡಿ, ಶಶಿಧರ ಅವರು ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನಸೆಳೆದರು. ನಿವೃತ್ತಿಯ ನಂತರ ಪಿಂಚಣಿ ಮೊತ್ತವನ್ನು ಹೆಚ್ಚಿಸುವ ಬಗ್ಗೆ, ಶೈಕ್ಷಣಿಕ ಧನ ಸಹಾಯ ನೀಡುವ ಬಗ್ಗೆ, ಆರೋಗ್ಯ ನೆರವಿಗೆ ಹೆಚ್ಚಿನ ಧನಸಹಾಯ ನೀಡುವ ಬಗ್ಗೆ, ಕಾರ್ಮಿಕ ಹೋರಾಟಗಳಿಂದ ಸಂಘಟಿತರಾದ ಬಗ್ಗೆ ಸಭೆಯ ಗಮನ ಸೆಳೆದರು.
ಕಾರ್ಮಿಕ ಅಧಿಕಾರಿ ಡಿ.ಜಿ. ನಾಗೇಶ್ ಸ್ವಾಗತಿಸಿದರು. ವಿಭಾಗ ಎರಡರ ಅಧಿಕಾರಿ ಗೋಪಾಲಗೌಡ ಉಪಸ್ಥಿತರಿದ್ದರು. ವಿಷ್ಣು ಪ್ರಸಾದ್ ಸ್ವಾಗತಿಸಿದರು. ಸತ್ಯನಾರಾಯಣ ವಂದಿಸಿದರು.