




ತೋಟ ಬೆಂಗ್ರೆ ಯಲ್ಲಿ 3,500, ವಲಯ ಒಂದ ರಲ್ಲಿ 1500, ಪಣಂ ಬೂರು ಸಸಿ ಹಿತ್ಲುವಿ ನಲ್ಲಿ 1500, ವಲಯ 4ರಲ್ಲಿ 700, ವಲಯ 5 ರಲ್ಲಿ 700, ಜನರು ಕಡಲ ತೀರ ಶುಚಿತ್ವ ದಲ್ಲಿ ಪಾಲ್ಗೊಂ ಡಿದ್ದರು. ಈ ಸಂದರ್ಭ ದಲ್ಲಿ ಒಟ್ಟು 23 ಲಾರಿ, ಟೆಂಪೊ ಟ್ರ್ಯಾಕ್ಸ್, 407 ವಾಹನ ಗಳಲ್ಲಿ ಒಟ್ಟು 65 ಲೋಡ್ ಕಸ ಸಂಗ್ರ ಹಿಸ ಲಾಗಿದ್ದು, ವಿಲೇ ವಾರಿ ವ್ಯವಸ್ಥೆ ಮಾಡ ಲಾಗಿದೆ ಎಂದೂ ಜಿಲ್ಲಾಧಿ ಕಾರಿಗಳು ತಿಳಿಸಿ ದರು. ಎಲ್ಲ ತಾಲೂಕು ಕೇಂದ್ರ ಗಳಲ್ಲಿ ನಡೆದ ಸ್ವಚ್ಛತಾ ಶ್ರಮದಾನದಲ್ಲಿ ಜನಪ್ರತಿನಿಧಿಗಳ ಸಕ್ರಿಯ ಪಾಲ್ಗೊಳ್ಳುವಿಕೆ ಸ್ವಯಂಸೇವಕರಲ್ಲಿ ಸ್ಫೂರ್ತಿಯನ್ನು ಮೂಡಿಸಿತು.
ತೋಟ ಬೆಂಗ್ರೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ. ಕೃಷ್ಣ ಪಾಲೇಮಾರ್, ವಿಧಾನಸಭಾ ಉಪಸಭಾಧ್ಯಕ್ಷರಾದ ಯೋಗೀಶ್ ಭಟ್ ಮತ್ತು ಹೈಕೊರ್ಟ್ ನ್ಯಾಯಾಧೀಶರಾದ ನಾಗಮೋಹನ್ ದಾಸ್ ಅವರು ಸ್ವಚ್ಛತೆಯ ಸಂದೇಶವನ್ನು ನೀಡಿದರು. ಪರಿಸರ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವರು ಪ್ಲಾಸ್ಟಿಕ್ ನಿಷೇಧವನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತಂದಿರುವ ಬಗ್ಗೆ ಮಾಹಿತಿ ನೀಡಿದರು. ಮಂಗಳೂರು ಮೇಯರ್ ಪ್ರವೀಣ್ ಕುಮಾರ್,ಉಪಮೇಯರ್ ಗೀತಾ ನಾಯಕ್, ಜಿಲ್ಲಾಧಿಕಾರಿ ಸುಬೋಧ್ ಯಾದವ್, ನ್ಯಾಯಾಧೀಶರಾದ ಅಬ್ದುಲ್ ನಝೀರ್, ಬಿ.ಎನ್ ಪಿಂಟೋ,ಎಚ್ ಆರ್ ದೇಶಪಾಂಡೆ, ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್, ಪ್ರದೀಪ್ ಕುಮಾರ್ ಕಲ್ಕೂರ, ಎಂ ಆರ್ ಪಿ ಎಲ್ ನ ಲಕ್ಷ್ಮೀ ಕುಮಾರನ್, ಪಾಲಿಕೆ ಆಯುಕ್ತರಾದ ಡಾ. ಕೆ. ಎನ್ ವಿಜಯಪ್ರಕಾಶ್ ಸೇರಿದಂತೆ,ಅನೇಕ ಜನ ಪ್ರತಿನಿಧಿಗಳು, ವಿವಿಧ ಸೇವಾ ಸಂಸ್ಥೆಗಳ, ಶಿಕ್ಷಣ ಸಂಸ್ಥೆಗಳ ಸ್ವಯಂ ಸೇವಕರು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು.