Tuesday, January 29, 2013

99 ಫಲಾನುಭವಿಗಳಿಗೆ ಚೆಕ್ ವಿತರಣೆ

ಮಂಗಳೂರು, ಜನವರಿ. 29:- ಸಮಗ್ರ ಮಕ್ಕಳ ರಕ್ಷಣಾ ಯೋಜನೆಯ ಪ್ರಾಯೋಜಕತ್ವದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ 99 ಮಕ್ಕಳಿಗೆ ಶೈಕ್ಷಣಿಕ ನೆರವು ವಿತರಿಸಲಾಯಿತು.
ಜಿಲ್ಲೆ ಯಲ್ಲಿ ರುವ ಅರ್ಹ ಏಕ ಪೋಷ ಕರ ನೆರ ಳಿನಡಿ ಬೆಳೆ ಯುವ ಮಕ್ಕಳು ವಿದ್ಯಾ ಭ್ಯಾಸ ಅರ್ಧದಲ್ಲೇ ಕೈ ಬಿಡ ದಂತೆ ತಡೆ ಯಲು ಹಾಗೂ ಮಕ್ಕಳು ಕುಟುಂ ಬದೊ ಳಗೆ ಬೆಳೆ ಯಲು ಈ ಪ್ರೋತ್ಸಾ ಹಧನ ಸಹಾಯ ವನ್ನು ನೀಡ ಲಾಗುತ್ತದೆ.
ಸಹಾಯಧನ ವಿತರಿಸಿ ಮಾತನಾಡಿದ ಜಿಲ್ಲಾಧಿಕಾರಿ  ಎನ್. ಪ್ರಕಾಶ್ ಅವರು, ವಿದ್ಯೆಯು ಜೀವನಕ್ಕೆ ಬೆಳಕನ್ನು ನೀಡುತ್ತದೆ. ಸರಕಾರ ನೀಡುವ ಸವಲತ್ತುಗಳನ್ನು ಬಳಸಿ ಸಬಲರಾಗಿ ಎಂದು ಮಕ್ಕಳಿಗೆ ಹಿತವಚನ ನುಡಿದರು.
ಮಕ್ಕಳ ಹಿತರಕ್ಷಣಾ ಸಮಿತಿ ಅಧ್ಯಕ್ಷರಾದ ಶ್ರೀಮತಿ ಆಶಾ ನಾಯಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ಎನ್ ವಿಜಯಪ್ರಕಾಶ್ ಉಪಸ್ಥಿತರಿದ್ದರು. ಜಿಲ್ಲಾ ಮಕ್ಕಳ ರಕ್ಷಣ ಘಟಕದ ಶ್ರೀಮತಿ ಗ್ರೇಸಿ ಗೊನ್ಸಾಲಿಸ್ ಅವರು ಸ್ವಾಗತಿಸಿದರು.