
ಮುಖ್ಯಮಂತ್ರಿಗಳು ಜಿಲ್ಲಾ ಪಂಚಾಯತ್ ಗೆ ವಿಶೇಷ ಅನುದಾನ ನೀಡಿದ್ದು ಪ್ರತೀ ತಾಲೂಕಿಗೊಂದರಂತೆ ಐದು ತಾಲೂಕಿಗೆ 500 ಲಕ್ಷದಂತೆ ಐದು ಕೋಟಿ ರೂ.ಬಿಡುಗಡೆ ಮಾಡಲಾಗಿದೆ. ಈ ಹಣದಿಂದ ಮೂಲಭೂತ ಸೌಕರ್ಯ, ಅಂಗನವಾಡಿ ಕಟ್ಟಡ ನಿರ್ವಹಣೆಗೆ, ಕಾಲು ಸಂಕಕ್ಕೆ ಬಳಸಬಹುದಾಗಿದೆ.
ಬೇಸಿಗೆಯಲ್ಲಿ ತುರ್ತು ಕುಡಿಯುವ ನೀರಿಗೆ 98.91 ಲಕ್ಷ ವನ್ನು ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿದ್ದು, ಇದರಿಂದ ಪರಿಣಾಮಕಾರಿ ಕಾರ್ಯನಿರ್ವಹಣೆಯಾಗಿದೆ. ಕುಡಿಯುವ ನೀರೊದಗಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.