

ರಾಜ್ಯ ಮಕ್ಕಳ ಹಕ್ಕು ಆಯೋಗ ಖಂಡನೆ:
ದಿನಾಂಕ 16-12-10 ರಂದು ಕಂಪದಕೋಡಿ ಮಂಗಳೂರಿನಲ್ಲಿ 3 ವರ್ಷದ ಮುಗ್ಧ ಮಗುವನ್ನು ಪೂಜೆಯ ಕಾರಣ ನೀಡಿ ಕಾಳ ಭೈರವ ಗುಡಿಯೊಂದರಲ್ಲಿ ಅಮಾನವೀಯವಾಗಿ ಅಮಾನುಷವಾಗಿ ಕೊಲೆ ಮಾಡಿರುವುದು ನಾಗರೀಕ ಸಮಾಜ ತಲೆತಗ್ಗಿಸುವ ವಿಷಯವಾಗಿರುತ್ತದೆ. ಈ ನಂಬಲಸಾಧ್ಯ ಘಟನೆಯಿಂದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ತೀವ್ರ ಅಘಾತಕ್ಕೊಳಗಾಗಿರುತ್ತದೆ.21 ನೇ ಶತಮಾನದ ನಾಗರೀಕ ಸಮಾಜದಲ್ಲಿ ಇಂತಹ ಮೂಢನಂಬಿಕೆಗೆ ಮುಗ್ಧ ಹೆಣ್ಣು ಮಗುವಿನ ಕೊಲೆ ನಡೆದಿರುವುದು ಖಂಡನೀಯ.ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಈ ರೀತಿಯ ಘಟನೆಗಳು ಎಲ್ಲಿಯೂ/ಯಾವಾಗಲೂ ನಡೆಯದಂತೆ ತಡೆಯಲು ಸಾರ್ವಜನಿಕರಲ್ಲಿ ಸಹಕಾರವನ್ನು ಕೋರುತ್ತದೆ. ಇಂತಹ ಘಟನೆ ನಡೆಯುವುದು ಕಂಡು ಬಂದರೆ ಸಾರ್ವಜನಿಕರು ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ಹಾಗೂ ಬೆಂಗಳೂರು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ,4ನೇ ಮಹಡಿ ,ಕೃಷಿ ಭವನ,ನೃಪತುಂಗ ರಸ್ತೆ,ಬೆಂಗಳೂರು ದೂ.ಸಂ.22115292 ಕ್ಕೆ ಮಾಹಿತಿ ನೀಡಲು ಕೋರಿದೆ.