
ಬಂಟ್ವಾಳ 41.8 ಮಿಲಿಮೀಟರ್(26.8 ಮಿಲಿ ಮೀಟರ್) ಬೆಳ್ತಂಗಡಿ 25.8 ಮಿಲಿ ಮೀಟರ್(4.2 ಮಿಲಿ ಮೀಟರ್) ಮಂಗಳೂರು 48.7 ಮಿಲಿ ಮೀಟರ್ (3.6ಮಿಲಿಮೀಟರ್) ಪುತ್ತೂರು 25.6 ಮಿಲಿ ಮೀಟರ್(23.4 ಮಿಲಿ ಮೀಟರ್) ಸುಳ್ಯ 20.4 ಮಿಲಿ ಮೀಟರ್(14.6ಮಿಲಿ ಮೀಟರ್) ಮಳೆಯಾಗಿರುತ್ತದೆ.
ಮಳೆ ಹಾನಿ ವಿವರ:ಜಿಲ್ಲೆಯಲ್ಲಿ ದಿನಾಂಕ 28-8-12 ರವರೆಗೆ ಒಟ್ಟು 289 ಮನೆಗಳಿಗೆ ಹಾನಿಯಾಗಿ ಒಟ್ಟು ರೂ.7.54 ಲಕ್ಷಗಳ ಪರಿಹಾರವನ್ನು ಪಾವತಿ ಮಾಡಲಾಗಿರುತ್ತದೆ. ಇದರಲ್ಲಿ ಪ್ರತೀ ತಾಲೂಕಿನಲ್ಲಿ ಹಾನಿಯಾದ ವಿವರ ಮತ್ತು ಪಾವತಿಯಾದ ಪರಿಹಾರದ ಮೊತ್ತ ಇಂತಿದೆ. ಮಂಗಳೂರು 64 ಪ್ರಕರಣಗಳು ದಾಖಲಾಗಿ ರೂ.1.43 ಲಕ್ಷಗಳನ್ನು ಪಾವತಿಸಿದ್ದು 10 ಪ್ರಕರಣಗಳು ಬಾಕಿ ಉಳಿದಿರುತ್ತವೆ. ಬಂಟ್ವಾಳ ತಾಲೂಕಿನಲ್ಲಿ 82 ಪ್ರಕರಣಗಳು ದಾಖಲಾಗಿ ರೂ.2.46 ಲಕ್ಷ ಪರಿಹಾರ ಪಾವತಿಯಾಗಿದೆ. ಪುತ್ತೂರು ತಾಲೂಕಿನಲ್ಲಿ 27 ಪ್ರಕರಣಗಳಿಗೆ ರೂ.0.59 ಲಕ್ಷಗಳ ಪಾವತಿಯಾಗಿದೆ. ಬೆಳ್ತಂಗಡಿ ತಾಲೂಕಿನಲ್ಲಿ45 ಪ್ರಕರಣಗಳಲ್ಲಿ ರೂ.1.34 ಲಕ್ಷ ಪಾವತಿಯಾಗಿದೆ. ಸುಳ್ಯ ತಾಲೂಕಿನಲ್ಲಿ 53 ಪ್ರಕರಣಗಳಿಗೆ ರೂ. 1.23 ಲಕ್ಷ ಪಾವತಿಯಾಗಿದೆ. ಕಡಬದಲ್ಲಿ 4 ಪ್ರಕರಣಗಳಲ್ಲಿ 0.09 ಲಕ್ಷ ಪಾವತಿಯಾಗಿ ,ಮೂಡಬಿದ್ರೆಯಲ್ಲಿ14 ಪ್ರಕರಣಗಳಲ್ಲಿ 0.40 ಲಕ್ಷ ಪಾವತಿಯಾಗಿದೆ. ಜಾನುವಾರು ಹಾನಿಯಲ್ಲಿ ಪುತ್ತೂರಿನ 1 ಪ್ರಕರಣದಲ್ಲಿ ರೂ.10,000/-ವನ್ನು ಪಾವತಿ ಮಾಡಲಾಗಿದೆ.ಕೃಷಿ ಬೆಳೆ ಹಾನಿಯಲ್ಲಿ 80.76 ಎಕ್ರೆಯಲ್ಲಿ ಒಟ್ಟು 53 ಪ್ರಕರಣಗಳಲ್ಲಿ 97,632 ರೂ.ಗಳನ್ನು ಪಾವತಿಸಲಾಗಿದೆ. ತೋಟಗಾರಿಕಾ ಬೆಳೆಯಲ್ಲಿ ಒಟ್ಟು 24.73 ಎಕ್ರೆಯಲ್ಲಿ 19 ಪ್ರಕರಣಗಳು ದಾಖಲಾಗಿರೂ. 34,156/- ಪಾವತಿ ಮಾಡಲಾಗಿದೆ.ಪ್ರಾಕೃತಿಕ ವಿಕೋಪದಿಂದ ಒಟ್ಟು 10 ಜನರು ದಿನಾಂಕ 1-4-12 ರಿಂದ 28-8-12 ರ ವರೆಗೆ ಮರಣ ಹೊಂದಿದ್ದು ಇವರಿಗೆ ತಲಾ ರೂ.1.50 ಲಕ್ಷ ಅನುಕಂಪ ಅನುದಾನವನ್ನು ಪಾವತಿಸಿದೆಯೆಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.